ಹೆಚ್ಚು ಬುದ್ಧಿವಂತರು ಯಾರು?

ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್‌ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು.

ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ಕೊಳ್ಳ, ಬಾವಿ ಸುತ್ತಲು ಹೋದರು.

ಅಲ್ಲೊಂದು ಹಳ್ಳದ ಪೊದೆಯಲ್ಲಿ ಅಸ್ಥಿಪಂಜರವೊಂದು ಬಿದ್ದಿತ್ತು. ಎಲ್ಲರೂ ಅದನ್ನು ನೋಡಿ ದಂಗುಬಡಿದು ಹೋದರು.

ಅದಕ್ಕೆ ಲಕ್ಷ್ಮಣ ಪಾತ್ರೋಟ್ ಹೇಳಿದ ‘ಗೆಳೆಯರೆ… ಆ ಆಸ್ಥಿಪಂಜರದ ಗೊಡವೆ ನಮಗೇಕೆ? ನಾಳೆ ಸಂಕ್ರಾಂತಿ ಹಬ್ಬವಿದೆ. ಸ್ನಾನ, ಪೂಜೆ, ಕಬ್ಬು, ಸಿಹಿಗೆಣಸು, ಅವರೆಕಾಯಿ, ನೆಲಗಡಲೆ, ಹೂವುಹಣ್ಣು, ಬೂದುಗುಂಬಳಕಾಯಿ ಇತ್ಯಾದಿ ಹೊತ್ತು ಹೋಗುವ, ಅದನ್ನು ಅಲ್ಲೇ ಬಿಸಾಕಿ ಅದರ ಸುದ್ದಿಗದ್ದಲ ನಮಗೇಕೆ?’ ಎಂದು ಕೈಮುಗಿದು ನಿಂತ.

ರಾಜಕುಮಾರ್‌ ಬಡಿಗೇರ ಆ ಆಸ್ಥಿಪಂಜರವನ್ನೆಲ್ಲ ಫೂನರ್‌ ನಿರ್ಮಾಣ ಮಾಡಿ ಸಂಭ್ರಮಿಸಿದ.

‘ನಾನೇನು ಕಡಿಮೆನೇ…’ ಎಂದು ಶಂಕರ್ ಗುಡಿಮನಿ ಅದಕ್ಕೆ ರಕ್ತ, ಮಾಂಸ, ಆಕಾರ ನೀಡಿಯೇ ಬಿಟ್ಟ!

ಆಹಾ ಅದಕ್ಕೆ ಉಸಿರು ಜೀವ ತುಂಬಿದ ಜಯಪ್ಪ!

ಅಬ್ಬಾ! ಪಿಶಾಚಿಯೊಂದು ಭೂಮಿ ಆಕಾಶದೆತ್ತರ ಎದ್ದು ನಿಂತು- ‘ನನ್ನ ಬದುಕಿಸಿದವರ್‍ಯಾರು? ಮೊದಲು ಅವರನ್ನು ನುಂಗಿ ಬಿಡುವೆ’ ಎಂದು ಮೂವರನ್ನು ನುಂಗಿ ನೀರು ಕುಡಿಯಿತು.

ಇತ್ತ ಪರಿಣಾಮದ ಅರಿವು ಊಹಿಸಿ ಆಗಲೆ ಊರ ಕಡೆ ಓಟ ಕಿತ್ತಿದ್ದ… ಲಕ್ಷ್ಮಣ ಪಾತ್ರೋಟ ಮಹಾ ಬುದ್ಧಿವಂತನೆನಿಸಿದ್ದ!

ಹಳ್ಳಿ ಮನುಷ್ಯ… ಓಡೋಡಿ ಮನೆ ಸೇರಿದ್ದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮೂಹ
Next post ಹಾಲಿಂದ ಮಾಡಿದರೊ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys